ಮರದ ಜೊತೆ ಮಾತುಕಥೆ

ನೆಲ: ನಿನ್ ಬೇರನ್ನ ಹೊಟೇಲಿಟ್ಟು
ಕಾಪಾಡ್ತೀನಿ ನಾನು,
ಆದ್ರೂ ನನ್ಮೇಲ್ ಒಣಗಿದ ಹೂವು
ಎಲೆ ಚೆಲ್ತೀ ನೀನು!

ಮರ: ಬಿಸಿಲಲ್ಲಿ ನೀ ಕಾಯದ ಹಾಗೆ
ಬೇಯದ ಹಾಗೆ ದಿನವೂ
ತಂಪಾಗಿರೋ ನೆರಳನ್ನೂ ಸಹ
ಚೆಲ್ತೀನಲ್ಲ ನಾನು?

ಮೋಡ: ಮಳೆಗಾಲ್ದಲ್ಲಿ ನೀರನ್ ಸುರಿಸಿ
ಒಣಗಿದ ಬೇರನ್ ತೊಯ್ಸಿ
ಕಾಪಾಡ್ತೀನಿ
ಜನಗಳು ತಿನ್ನಲಿ ಎಂದು.

ಬಿಸಿಲು: ಶಾಖ ಬೆಳಕು ಕೊಟ್ಟು ನಿನ್ನನ್
ಬೆಳೆಸ್ತೀನಲ್ಲ ಮರವೆ,
ಬದಲಿಗೆ ಯಾರ್‍ಗೂ ಏನನ್ನೂ ನೀನ್
ಕೊಡದೇ ಇರೋದು ಸರಿಯೇ?

ಮರ: ಸುತ್ತಾ ಹತ್ತೂ ಕಡೇಗೆ ನನ್ನ
ರೆಂಬೆ ಕೊಂಬೆ ಅಟ್ಟಿ
ಹಕ್ಕೀಗೂಡಿಗೆ ಸೈಟುಗಳನ್ನು
ಒದಗಿಸ್ತೀನಿ ಬಿಟ್ಟಿ!

ಮನುಷ್ಯ: ಹೂವು ಹಣ್ಣು ನೆರಳು ಕೊಟ್ಟು
ಖುಷಿ ಕೊಡ್ತೀಯಲ್ಲ,
ಅದಕ್ಕೆ ನಿನಗೆ ಏನಾದ್ರೊಂದು
ಉಪಕಾರ ನಾ ಮಾಡ್ಲ?

ಮರ: ನನ್ನನ್ ಕಡಿದು ಸೌದೆ ಮಾಡಿ
ಒಲೇಲಿ ಸುಡ್ತೀಯಲ್ಲ
ಅದನ್ನ ನಿಲ್ಸು ಸಾಕು, ಹೆಚ್ಚಿನ
ಉಪಕಾರಾನೇ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೮೪
Next post ನೀರಲಗಿಡ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys